ಬುಧವಾರ, ಜುಲೈ 27, 2011

ಮಳೆನಮ್ಮೆಯಲ್ಲಿ ಮಿಂದೆದ್ದ ರೈತರು

 ವಿಕ ಸುದ್ದಿಲೋಕ ಮಡಿಕೇರಿ
ಪ್ರಕೃತಿಯ ಮಡಿಲಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಮಂಗಳ ವಾರ ಮಣ್ಣಿನ ಮಕ್ಕಳು ಹಾಡಿದರು, ಕುಣಿದರು, ನಲಿದರು. ಇವರ ಈ ಸಂಭ್ರಮಕ್ಕೆ ಕಾರಣವಾದದ್ದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಮಳೆ ನಮ್ಮೆ (ಮಳೆ ಹಬ್ಬ). ಸದಾ ದುಡಿಮೆಯಲ್ಲಿ ಮುಳುಗುವ ರೈತಾಪಿ ವರ್ಗ ಮಂಗಳವಾರ ಎಲ್ಲಾ ಜಂಜಾಟಗಳನ್ನು ಮರೆತು ಸಂಭ್ರಮಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ