ಬುಧವಾರ, ಜುಲೈ 27, 2011

ಮಳೆನಮ್ಮೆಯಲ್ಲಿ ಮಿಂದೆದ್ದ ರೈತರು

 ವಿಕ ಸುದ್ದಿಲೋಕ ಮಡಿಕೇರಿ
ಪ್ರಕೃತಿಯ ಮಡಿಲಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಮಂಗಳ ವಾರ ಮಣ್ಣಿನ ಮಕ್ಕಳು ಹಾಡಿದರು, ಕುಣಿದರು, ನಲಿದರು. ಇವರ ಈ ಸಂಭ್ರಮಕ್ಕೆ ಕಾರಣವಾದದ್ದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಮಳೆ ನಮ್ಮೆ (ಮಳೆ ಹಬ್ಬ). ಸದಾ ದುಡಿಮೆಯಲ್ಲಿ ಮುಳುಗುವ ರೈತಾಪಿ ವರ್ಗ ಮಂಗಳವಾರ ಎಲ್ಲಾ ಜಂಜಾಟಗಳನ್ನು ಮರೆತು ಸಂಭ್ರಮಿಸಿತು.

ಮಂಗಳವಾರ, ಜುಲೈ 19, 2011

ಕೊಡಗಿನಲ್ಲಿ ಭಾರಿ ಮಳೆ: ಮಹಿಳೆ ಬಲಿ

ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ನದಿ ತೊರೆಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯಲು ಪ್ರಾರಂಭಿಸಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಎರಡನೇ ಬಾರಿಗೆ ಜಲಾವೃತಗೊಂಡಿದೆ. ಭಾರಿ ಮಳೆಗೆ ಶ್ರೀಮಂಗಲದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರು.
ಭಾಗಮಂಡಲ-ಅಯ್ಯಂಗೇರಿ ಹಾಗೂ ಭಾಗಮಂಡಲ- ಮಡಿಕೇರಿ ರಸ್ತೆಯ ಮೇಲೆ  ನೀರು ಉಕ್ಕಿ ಹರಿಯಲು ಪ್ರಾರಂಭಿ ಸಿದೆ. ಅಯ್ಯಂಗೇರಿ ರಸ್ತೆಯಲ್ಲಿ ಎರಡು ಅಡಿ ಎತ್ತರದಲ್ಲಿ ನದಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಮಡಿಕೇರಿ ರಸ್ತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪ್ರವೇಶಿಸದ ಕಾರಣ ಸಂಚಾರ ವ್ಯವಸ್ಥೆ ಎಂದಿನಂತೆ ಇದೆ.

ಅನಾಥವಾದವು ಐತಿಹಾಸಿಕ ಸ್ಮಾರಕಗಳು

ಕಾಂಗೀರ ಕೆ. ಬೋಪಣ್ಣ ವೀರಾಜಪೇಟೆ
ವೀರರಾಜೇಂದ್ರ ರಾಜನ ಕಾಲದಲ್ಲಿ ನಿರ್ಮಾಣ ವಾದ ಅಂದಿನ ವೀರರಾಜೇಂದ್ರಪೇಟೆ ಇಂದು ವೀರಾಜಪೇಟೆಯಾಗಿ ಬೆಳೆದಿದೆ. ಆದರೆ ರಾಜರ ಕಾಲದ ಕುರುಹುಗಳು ವಿರಳ. ಇರುವ ಎರಡು ಸ್ಮಾರಕಗಳನ್ನು  ಸಂರಕ್ಷಿಸಲು  ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ.
ಗಡಿಯಾರ ಕಂಬದ ಕಡೆಯಿಂದ ಪ್ರವಾಸಿ ಮಂದಿರದ ಕಡೆಗೆ ತೆರಳಲು ಬಳಕೆಯಾಗು ತ್ತಿದ್ದ ಗುಮ್ಮಟ ಮೆಟ್ಟಿಲುಗಳು ರಾಜರ ಸ್ಮಾರಕ. ಆದರೆ ಇದು ವಿಕ್ಟೋರಿಯ ಕ್ಲಬ್‌ನ ಜಾಗದಲ್ಲಿದೆ. ಪ್ರಸ್ತುತ ಪ್ರವಾಸಿ ಮಂದಿರದ ಕಡೆಗೆ ತೆರಳುವ ಹಳೆಯ ಮಾರ್ಗ ಬಂದ್ ಆಗಿದೆ. ಇದು ಖಾಸಗಿ ಜಾಗದಲ್ಲಿದ್ದರೂ ಅದನ್ನು ಸಂರಕ್ಷಿಸಲು ಪಟ್ಟಣ ಪಂಚಾಯಿತಿ  ಕಾಳಜಿ ವಹಿಸಬೇಕಾಗಿತ್ತು. ಆದರೆ ಅಂಥ ಇಚ್ಛಾಶಕ್ತಿ  ಪಂಚಾಯಿತಿಗೆ ಇದ್ದಂತಿಲ್ಲ.

ಶನಿವಾರ, ಜುಲೈ 16, 2011

ಸವಲತ್ತು ಸದ್ಬಳಕೆಗೆ ಸಿಬ್ಬಂದಿ ಕೊರತೆ

ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸವಲತ್ತುಗಳಿವೆ. ವೈದ್ಯರ ಹಾಗೂ ಪರಿಣತರ ಕೊರತೆ ಸವಲತ್ತು ಒದಗಿಸಲು ಅಡ್ಡಿಯಾಗಿದೆ ಎಂದು  ಜಿಲ್ಲಾ ಶಸ್ತ್ರಚಿಕಿತ್ಸಕ  ಡಾ.ಸಿ.ಕೆ. ಅಜಿತ್‌ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆ ಕುಂದು ಕೊರತೆ- ಸವಲತ್ತುಗಳ ಕುರಿತು  ಪತ್ರಿಕೆಯ ಮಡಿಕೇರಿ ಕಚೇರಿಯಲ್ಲಿ  ಶುಕ್ರವಾರ ಡಾ.ಅಜಿತ್‌ಕುಮಾರ್ ಅವರೊಂದಿಗೆ ನಡೆಸಿದ  `ವಿಕ ಫೋನ್ ಇನ್' ಕಾರ್ಯಕ್ರಮಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಮಂಗಳವಾರ, ಜುಲೈ 12, 2011

ರೈಲು ಬಿಡುವುದೇ ಬೇಡ !

ಕೊಡಗು ರೈಲ್ವೆ ಸಂಪರ್ಕ ಹೊಂದಿಲ್ಲದ ರಾಜ್ಯದ ಏಕೈಕ ಜಿಲ್ಲೆ. ಹಲವು ವರ್ಷದಿಂದ  ಸಂಪರ್ಕ ಒದಗಿಸುವ ಪ್ರಯತ್ನ ಸಾಗಿದೆ. ಪಶ್ಚಿಮಘಟ್ಟದ ಹೃದಯ ಭಾಗದ ಕೊಡಗಿಗೆ ರೈಲ್ವೆ ಸಂಪರ್ಕ ಪ್ರಕೃತಿಗೆ ದೊಡ್ಡ ಮಟ್ಟದ ಪೆಟ್ಟು  ನೀಡಲಿದೆ ಎಂಬ ಆತಂಕ ಪರಿಸರ ಪ್ರೇಮಿಗಳದು.
  ಮತ್ತೊಂದೆಡೆ, ಸಂಪರ್ಕ ಒದಗಿಸಿದಲ್ಲಿ  ಉಪಯೋಗ ಹೆಚ್ಚು. ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತದೆ. ಕಾರ್ಮಿಕರ ಸಮಸ್ಯೆ ಪರಿಹಾರವಾಗಲಿದೆ ಎಂದು ಬೆಂಬಲ ವ್ಯಕ್ತಪಡಿಸುತ್ತಿರುವವರ ಅಭಿಪ್ರಾಯ. ಹೊರಗಿನಿಂದ ಸಮಾಜಘಾತುಕ ಶಕ್ತಿಗಳ ಆಗಮನವಾಗುತ್ತದೆ ಎಂಬ ಭಯ ಹಲವರಿಗಾದರೆ, ಕೊಡಗಿನ ಗಡಿವರೆ ಗಾದರೂ ರೈಲು ಬರಲಿ ಅನ್ನುವವರು ಇನ್ನೂ  ಕೆಲವರು.

ಸೋಮವಾರ, ಜುಲೈ 11, 2011

ಸುಂಟಿಕೊಪ್ಪದಲ್ಲಿ ಗುಂಡಿ ಮುಚ್ಚಿ ಸ್ವಾಮೀ...

ಸುಂಟಿಕೊಪ್ಪ ಹಾದುಹೋಗುವ ರಾಜ್ಯ ಹೆದ್ದಾರಿ ಕಾಮಗಾರಿ ಇತ್ತೀಚೆಗೆ ನಡೆಯಿತು. ರಸ್ತೆ ಬದಿ ಕೈಗೆತ್ತಿಕೊಂಡಿರುವ ಚರಂಡಿ ಕಾಮಗಾರಿ ವೇಳೆ ಹಲವೆಡೆ ಸಮರ್ಪಕ ಕೆಲಸವಾಗಿಲ್ಲ. ಮುಖ್ಯರಸ್ತೆ ಬದಿಯಲ್ಲಿ ಬೃಹತ್ ಗುಂಡಿ ಮುಚ್ಚಲು ಕ್ರಮ ಕೈಗೊಂಡಿಲ್ಲ

ಬುಧವಾರ, ಜುಲೈ 6, 2011

ಪಾರಂಪರಿಕ ಪಟ್ಟಿ ಗೆ ವಿದ್ಯಾರ್ಥಿಗಳ ಪಟ್ಟು

ಸದೇಶ್ ಕಾರ್ಮಾಡ್ ಮಡಿಕೇರಿ
ಯುನೆಸ್ಕೋದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಕೊಡಗು ಜಿಲ್ಲೆಯ ಪಶ್ಚಿಮಘಟ್ಟ ತಾಣಗಳನ್ನು ಸೇರ್ಪಡೆಗೊಳಿಸ ಬೇಕೇ ಅಥವಾ ಬೇಡವೇ ಎಂಬುದು ಬಹು ಚರ್ಚೆಯ ವಿಚಾರ. ಇದು ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ.ಯೋಜನೆಯ ಕುರಿತು ಪರ-ವಿರೋಧದ ಮಾತುಗಳು ಕೇಳಿ ಬರುತ್ತಿವೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‌ನಲ್ಲಿಯೂ ಕೂಡ ಮಂಗಳವಾರ ಇದರದೇ  ಕಲರವ.
 ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ಮುಕ್ತವಾಗಿ ಚರ್ಚಿಸಿದರು. ತಮ್ಮ ಅಭಿಪ್ರಾಯ ಮಂಡಿಸಲು ಸಾಕಷ್ಟು ವಿದ್ಯಾರ್ಥಿಗಳು ಉತ್ಸಾಹ ತೋರಿದರು.